ಅಭಿರುಚಿ ಬೇರೆ ಬೇರೆ ಇರುವ ಗೆಳೆಯರ ಮಧ್ಯೆ ಕುಳಿತು; ಬರೆದು; ಅವರನ್ನು ಓದುವಂತೆ ಗೋಗರಿಯುವುದಿದೆಯಲ್ಲ, ಅದೊಂತರ ವಿಚಿತ್ರ ಅನುಭವ. ಫ್ರೆಂಡು ರವಿ ನನ್ನ ಕವಿತೆಗಳ ಹುಟ್ಟು ದ್ವೇಷಿ 'ಮಳೆಯು ಬರುತ್ತಿತ್ತು. ಅವಳು ಬಂದಳು. ದಾವಣಿ ಕೈಲಿ ಹಿಡಿದಳು, ಗೆಜ್ಜೆ ಕಟ್ಟಿದಳು' ಈ ರೀತಿ ಹೇಳುತ್ತಲಿ, ನನ್ನ ಕವಿತೆಗಳ ತೇಜೋವಧೆ ನಡೆಸುವನು. ' ನೀನು ಒಂದಲ್ಲಾ ಒಂದಿನ ನನ್ನ ಕವಿತೆ appreciate ಮಾಡ್ತಿಯ ' ಅಂದ್ರೆ ' ಓದುದ್ರೆ ಆಲ್ವಾ ಅದನ್ನ ಹೊಗಳೋದು. ನೀನು ಸಾವಿರ ಪೇಜ್ ಗದ್ಯ ಬರಿ. ಓದ್ತೀನಿ. ಆದರೆ ಪದ್ಯ ಬರೆದು ಮಾತ್ರ ತೋರಿಸಬೇಡ. ಈ ಕವಿಗಳಿಗೂ ಮಾಡಕ್ಕೆ ಕೆಲಸ ಇಲ್ಲ. ` ಪ್ರೀತಿ ಇಲ್ಲದ ಮೇಲೆ. ಹೂವು ಅರಳಿತು ಹೇಗೆ. ? ಮೋಡ ಕಟ್ಟಿ ಮಳೆ ಬಂತು ಹೇಗೆ. ? ` ಅಂತೆಲ್ಲಾ ಬರೀತಾರೆ. ಹೂವು ಅರಳಕ್ಕೂ, ಮಳೆ ಬರಕ್ಕೂ. ಈ ಪ್ರೀತಿಗೂ ಏನಪ್ಪಾ ಸಂಬಂಧ. ಬರುದ್ರೆ ನಮ್ಮ ದುಂಡಿರಾಜ್ ಬರೀತಾರಲ್ಲ ಹಂಗ್ ಬರೀಬೇಕು. 'ನಾವಿಬ್ಬರು ನಮಗಿಬ್ಬರು ಸಾಕಂತ ಮಧ್ಯ ರಬ್ಬರು. ` ಅಬ್ಬಾ , ಅದ್ಭುತ ಹಿಂಗ್ ಇರ್ಬೇಕು ಕವಿತೆ ಅಂದ್ರೆ. ಅದನ್ನ ಬಿಟ್ಟು 'ಅವಳು ಬಂದಳು ಗೆಜ್ಜೆ ಕಟ್ಟಿ ಕುಣಿದಳು ನಾನೊಬ್ಬ ನಾಲಾಯಕ್ ನಿಂತಿದ್ದೆ' ಅದು ಕವಿತೆ, ಅದು ಅರ್ಥ ಆಗ್ಲಿ, ಆಗದೆ ಇರ್ಲಿ, ಅದನ್ನ ಹೊಗಳೋದಕ್ಕೆ ಇನ್ನೊಂದಿಬ್ರು ಜೊತೆನಲ್ಲಿ.' ' ಲೋ ಅದು ಕವಿಸಮಯ. ನಿನ್ನಂತ ರುಚಿ ಹೀನನ ಜೊತೆ ಇದ್ದುಕೊಂಡು, ನನ್ನ ಸಾಹಿತ್ಯ ಕೃಷಿಗೆ ಹಿನ್ನಡ